" ಎಂಜಲು ಊಟ ಸರ್ವಥಾ ಮಾಡಬಾರದು - ನಿಷಿದ್ಧ "

ಒಂದೇ ಎಲೆ ಅಥವಾ ತಟ್ಟೆಯಲ್ಲಿ ಬೇರೆಯವರೊಂದಿಗೆ ಕುಳಿತು ಊಟ ಮಾಡುವುದು ದೋಷ. ಏಕೆಂದರೆ ಒಬ್ಬನೊಂದಿಗೆ ಇನ್ನೊಬ್ಬನ ಪ್ರಕೃತಿ ಮತ್ತು ಸ್ವಭಾವ ಹೊಂದಿಕೊಳ್ಳುವುದಿಲ್ಲ.

ಹೇಗೆ ಕುಷ್ಠು ರೋಗಿಯೊಂದಿಗೆ ಊಟ ಮಾಡುವುದರಿಂದ ಒಳ್ಳೆಯ ಮನುಷ್ಯನ ರಕ್ತವೂ ಕೂಡ ಕೆಟ್ಟು ಹೋಗುತ್ತದೋ ಹಾಗೆ ಬೇರೆಯವರೊಂದಿಗೆ ತಿನ್ನುವುದರಲ್ಲಿಯೂ ಕೇಡೇ ಆಗುತ್ತದೆ. ಅದು ಸುಧಾರಣೆಯಲ್ಲ!

ನೋಚ್ಛಿಷ್ಟ೦ ಕಸ್ಯಚಿದ್ದದ್ಯಾನ್ನಾದ್ಯಾಚ್ಚೈವ ತಥಾ೦ತರಾ ।
ನ ಚೈವಾತ್ಯಶನಂ ಕುರ್ಯಾನ್ನ ಚೋಚ್ಛಿಷ್ಟ: ಕ್ವಚಿದ್ವ್ರಜೇತ್ ।। ಮನು ೨/೫೬ ।।

ತನ್ನ ಎಂಜಲು ಪದಾರ್ಥವನ್ನು ಯಾವನಿಗೂ ಕೊಡಬಾರದು. ಯಾವನಾದರೂ ಊಟದ ನಡುವೆ ತಾನೂ ತಿನ್ನಬಾರದು. ಅತಿಯಾಗಿ ಊಟವನ್ನು ಮಾಡಬಾರದು. ಭೋಜನಾನಂತರ ಕೈ ಬಾಯಿ ತೊಳೆದುಕೊಳ್ಳದೆ ಎಲ್ಲಿಯೂ ಅತ್ತ ಇತ್ತ ಅಡ್ಡಾಡಬಾರದು.

ಅಂತೆಯೇ  ಸ್ತ್ರೀ - ಪುರುಷರೂ ಕೂಡಾ ಎಂಜಲು ಊಟ ಮಾಡಬಾರದು. ಏಕೆಂದರೆ ಅವರ ಶರೀರಗಳ ಗುಣ ಸ್ವಭಾವವೂ ಬೇರೆ ಬೇರೆಯಾಗಿವೆ.

" ಗುರೋರುಚ್ಛಿಷ್ಟ ಭೋಜನಮ್ " ಯೆಂದರೆ......

ಗುರುವಿನ " ಭೋಜನ " ಆದ ನಂತರ ಯಾವ ಪ್ರತ್ಯೇಕವಾದ ಆಹಾರವು ಶುದ್ಧವಾಗಿಡಲ್ಪಟ್ಟಿದೆಯೋ ಅದನ್ನು ಭಕ್ಷಿಸಬೇಕು. ಅಂದರೆ...

ಮೊದಲಿಗೆ ಗುರುಗಳಿಗೆ ಭೋಜನ ಮಾಡಿಸಿ, ಆ ಮೇಲೆ ಶಿಷ್ಯನು ಭೋಜನ ಮಾಡಬೇಕು. ಎನ್ನುವುದು ಇದರ ಅರ್ಥವಾಗಿದೆ. ( ಎಂಜಲು ತಿನ್ನಬೇಕೆಂದಲ್ಲ )

ಸಂಗ್ರಹಃ :-

ಗುರು ವಿಜಯ ಪ್ರತಿಷ್ಠಾನ